ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ವಾರದಿಂದ ವಾರಕ್ಕೆ ರಂಗು ಪಡೆಯುತ್ತಿದೆ. ಕಳೆದವಾರವಷ್ಟೇ ರೆಬೆಲ್ಸ್ಟಾರ್ ಅಂಬರೀಶ್ ಅವರ ಹೃದಯಂತರಾಳದ ಭಾವನೆಗಳನ್ನು ಕನ್ನಡಿಗರ ಮುಂದೆ ತೆರೆದಿಟ್ಟಿದ್ದ ಈ ಕಾರ್ಯಕ್ರಮ ಅಭಿಮಾನಿಗಳಿಗೆ ಗೊತ್ತಿಲ್ಲದೇ ಇದ್ದ ಸಾಕಷ್ಷು ವಿಷಯಗಳನ್ನು ಬಹಿರಂಗ ಮಾಡಿತ್ತು. ನಾವು ತೆರೆಯ ಮೇಲೆ ಸ್ಟಾರ್ ಆಗಿ ನೋಡುವ ದೊಡ್ಡ ಕಲಾವಿದರು ಹಿಂದೊಮ್ಮೆ ಸಾಮಾನ್ಯ ಮನುಷ್ಯನಾಗಿದ್ದರು ಎಂಬುದನ್ನು ತಿಳಿದು ನೋಡುಗರ ಮನದಲ್ಲೂ ಒಂದು ಆಶಾ-ಭಾವನೆಯನ್ನು ಮಾಡಿಸುತ್ತಿದೆ. ಕಳೆದ ಸಂಚಿಕೆಗಳಲ್ಲಿ ರಕ್ಷಿತಾ ಪ್ರೇಮ್, ವಿಜಯ ಪ್ರಕಾಶ್, ದೇವರಾಜ್ ಸೇರಿದಂತೆ ಹಲವಾರು ಬೆಳ್ಳಿ ತೆರಿಎಯ ಸ್ಟಾರ್ಗಳನ್ನು ತನ್ನ ವೀಕ್ಷಕರಿಗೆ ಪರಿಚಯಿಸಿದ ಜೀ ವಾಹಿನಿ ಈ ವಾರ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಣ್ಣದ ಬದುಕಿನ ಹಿಂದಿನ ದಿನಗಳು ಹೇಗಿದ್ದವು.
ಛಾಲೆಂಜಿಂಗ್ ಸ್ಟಾರ್ ಆಗುವ ಮೊದಲು ದರ್ಶನ್ ಅನುಭವಿಸಿದ ಕಷ್ಟದ ದಿನಗಳು ತಂದೆ ತೂಗುದೀಪ ಶ್ರೀನಿವಾಸ್ ಅವರ ಮಕ್ಕಳಾದರೂ ತಾನೊಬ್ಬ ನಾಯಕನಾಗಲು ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದರು ಎಂಬುದನ್ನು ದರ್ಶನ್ ಅವರೇ ಈ ಕಾರ್ಯಕ್ರಮದಲ್ಲಿ ರಮೇಶ್ ಅವರಿಂದ ಅವರ ಜೊತೆ ಹಂಚಿಕೊಳ್ಳಲಿದ್ದಾರೆ. ಅಲ್ಲವೆ ಬಾಲ್ಯದ ದಿನಗಳಲ್ಲಿ ದರ್ಶನ್ ಹೇಗಿದ್ದರು. ಅವರ ಸುತ್ತಲಿನ ಪರಿಸರ ಹೇಗಿತ್ತು. ಅವರ ಆತ್ಮೀಯ ಗೆಳೆಯರ್ಯಾರು ಎಂಬ ಬಗ್ಗೆ ಕೂಡ ದರ್ಶನ್ ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲಾ ರಸನಿಮಿಷ ಸವಿಯುವಂಥ ಸದಾವಕಾಶವನ್ನು ಜೀ ಕನ್ನಡವಾಹಿನಿ ತನ್ನ ಪ್ರೇಕ್ಷಕರಿಗೆ ಕಲ್ಪಿಸಿಕೊಟ್ಟಿದ್ದು ಈ ಕಾರ್ಯಕ್ರಮ ಇದೇ ೩೦ ಹಾಗೂ ೩೧ ರಂದು ಶನಿವಾರ ಮತ್ತು ಭಾನುವಾರ ರಾತ್ರಿ ೯ ಗಂಟೆಗೆ ಪ್ರಸಾರಗೊಳ್ಳಲಿದೆ. ದರ್ಶನ್ ಅವರ ಮೊದಲ ಚಿತ್ರ ಮೆಜೆಸ್ಟಿಕ್ನಿಂದ ವಿರಾಟ್ವರೆಗೆ ತಾವು ಚಿತ್ರರಂಗದಲ್ಲಿ ಸಾಗಿಬಂದ ಹಾದಿಯನ್ನು ಇಲ್ಲಿ ತೆರೆದಿಡಲಿದ್ದಾರೆ.